Sunday, July 29, 2007

ಮಂಥನದ ಕುರಿತು ಚಿಕ್ಕ ಚಿಂತನೆ

ಚಿಕ್ಕ ವಾಕ್ಯ. ಎಲ್ಲ ಅರ್ಧರ್ಧ. ನ್ಯಾಚುರಲ್ಲು ಅನಿಸಲ್ಲ. ವಾಕ್ಯ ಆರ್ಧಕ್ಕೇ ತುಂಡಾಗುತ್ತೆ. ಮನಸ್ಸಿಗೆ ಹರ್ಟಾಗುತ್ತೆ. ಧಾರಾವಾಹಿ ನೋಡೋದು ಸಾಕು ಅನ್ಸತ್ತೆ. ಚಾನಲ್ ಬದಲಾಯಿಸಿದ್ರೆ ಮನ್ಸು ನಿರಾಳ.
ಅಯ್ಯೋ! ಈ ಮಂಥನ ಧಾರವಾಹಿ ಪ್ರಭಾವ. ಈಟಿವಿಲಿ ರಾತ್ರಿ ೧೦.೦೦ ಗಂಟೆಗೆ ಪ್ರಸಾರವಾಗೋ ಧಾರಾವಾಹಿ ನೋಡಿದ ಪರಿಣಾಮ. ನಾನೂ ಅದೇ ಥರ ಬರೆಯೋಕೆ ಶುರುಮಾಡಿಬಿಟ್ಟೆ. ಅದೇಕೋ? ಅದೇನೋ? ಇತ್ತೀಚೆಗೆ ಮಂಥನ ಧಾರವಾಹಿ ನೋಡೋಕೆ ಕಷ್ಟ ಆಗ್ತಿದೆ. ಡೈಲಾಗ್‌ಗಳೆಲ್ಲ ಅರ್ಧರ್ಧ. ಒಂಥರಾ ಆರ್ಟಿಫಿಶಿಯಲ್ಲು ಅನ್ನಿಸೋಕೆ ಶುರುವಾಗಿದೆ. ಲಂಚ ಪಡೆಯದಿರೋ ಅಪರೂಪದ (ಸೌಂದರ್ಯದಲ್ಲಿ ಮತ್ತು ನಿಯತ್ತಿನಲ್ಲಿ) ಡಿಸಿಯನ್ನೇ ಕೇಂದ್ರೀಕರಿಸಿ ಇರೋ ಕಥೆ ಆರಂಭದಲ್ಲಿ ಚೆನ್ನಾಗಿದೆ ಅನ್ನಿಸುತ್ತಿತ್ತು. ಬರಬರುತ್ತ ಬೋರ್ ಆಗ್ತಿದೆ. ಅಪ್ಪ- ಮಗಳು ಮಾತಾಡುವಾಗಲೂ ಹರ್ಟ್ ಆಗುತ್ತೆ, ಮನಸ್ಸು ನಿರಾಳ ಅಂತೆಲ್ಲ ಶಬ್ದಗಳ ಪ್ರಯೋಗ. ನಾವು ನಮ್ಮ ತಂದೆ-ತಾಯಿಯ ಬಳಿ ಮಾತಾಡುವಾಗ ‘ಹರ್ಟ್-ನಿರಾಳ’ ಎಂಬೆಲ್ಲ ಶಬ್ದ ಬಳಸುತ್ತೇವಾ? ಖಂಡಿತ ಇಲ್ಲ. ಆಡು ಭಾಷೆಯಲ್ಲಿ ನಿರಾಳ ಅನ್ನೋ ಶಬ್ದದ ಬಳಕೆಯೇ ನಿಂತುಹೋಗಿದೆ. ಇದ್ದುದರಲ್ಲಿ ಶಿವಶಂಕರ ರೆಡ್ಡಿ ಡೈಲಾಗ್‌ಗಳು ಚೆನ್ನಾಗಿರುತ್ತವೆ.
ಇಂತಹ ಕಾರಣಗಳಿಗಾಗಿಯೇ ಮಂಥನ ನೋಡೋವಾಗ ಕಿರಿಕಿರಿ ಅನ್ನಿಸ್ತಾ ಇದೆ. ನಿಮಗ್ಯಾರಿಗಾದ್ರೂ ಮಂಥನ ಧಾರವಾಹಿ ಡೈಲಾಗ್ ಬರೆಯೋರು ಪರಿಚಯ ಇದ್ರೆ ಪ್ಲೀಸ್ ಅವ್ರಿಗೆ ತಿಳ್ಸಿ.
ಇದೇ ಥರದ ಸಮಸ್ಯೆ ಟಿವಿ೯ ನ್ಯೂಸ್ ನೋಡೋವಾಗಲೂ ಉಂಟು. ಅವರೂ ಅಷ್ಟೆ ಸುದ್ದಿಯನ್ನು ಮಾತನಾಡುವ ಭಾಷೆಯಲ್ಲಿ ಓದುತ್ತಾರೆ. ಅದು ಕೇಳೋಕೆ ಅಷ್ಟು ಚೆನ್ನಾಗಿರುವುದಿಲ್ಲ. ಸುದ್ದಿಯನ್ನು ಹೇಗೆ ಓದಬೇಕೋ ಹಾಗೆ ಓದಬೇಕು. ಅದು ನಮ್ಮ ಮನಸ್ಸಿನಲ್ಲಿ ಸ್ಥಿರವಾಗಿದೆ. ಸುದ್ದಿ ಎಂದರೆ ಹೀಗೇ ಓದಬೇಕು ಅಂತ ಮನಸ್ಸಿನಲ್ಲಿ ಪಕ್ಕಾಗಿದೆ. ಹಾಗಾಗಿ ಬೇರೆ ಥರ ಓದಿದರೆ ಸ್ವೀಕರಿಸೋದು ಕಷ್ಟ. ಅದಕ್ಕಿಂತ ಹೆಚ್ಚಾಗಿ ಆಡು ಬಾಷೆಯಲ್ಲಿ ಸುದ್ದಿ ಓದಿದರೆ ಗಂಭೀರ ಅಂತ ಅನ್ನಿಸೋದೇ ಇಲ್ಲ. ನೀವೇನಂತೀರಾ?

3 comments:

Anusha Vikas said...

very meaningful blog post. I am certainly interested in that daravaahi. :)

thanks for this nice article!;

--------------------------------------
Please visit http://quillpad.in/kannada/ for all your blogging in kannada needs. Blog anywhere and everywhere!

Raghu said...

ಬ್ಲೋಗ್ ತುಂಬಾ ಚೆನ್ನಾಗಿತ್ತು...
ಈ ಧಾರಾವಾಹಿಯಲ್ಲಿ ಅದೇ ಶಬ್ಧವನ್ನು ಪದೇ ಪದೇ ಬಳಸುವುದು ನೋಡಿ ಬೇಜಾರಾಗಿದೆ
ಉದಾ:" ಸೌಕರ್ಯ", "ಎಂಬ್ರಾಸ್ ಆಗುತ್ತೆ "

Anonymous said...

ಮಂಥನದ ಬಗೆಗಿನ ನಿಮ್ಮ ವಿಚಾರ ಮಂಥನ ನೂರಕ್ಕೆ ನೂರು ಸತ್ಯ.